ಪಾಣಾಜೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಕಟ್ಟಡಗಳನ್ನು ಶೀಘ್ರವೇ ಸರಿಪಡಿಸಿ ಉಪಯೋಗ ಯೋಗ್ಯ ಕಟ್ಟಡಗಳನ್ನಾಗಿ ಮಾಡಿ ಕೊಡಲು ಶಾಸಕರಿಗೆ ಮನವಿ
ಪುತ್ತೂರು: ದ ಕ ಜಿಲ್ಲೆಯ ಪುತ್ತೂರು ತಾಲೂಕು ಗಡಿನಾಡ ಪ್ರದೇಶವಾದ ಪಾಣಾಜೆ ಅರ್ಲಪದವಿನಲ್ಲಿ ಹಳೆಯ ಕಾಲದಿಂದಲೇ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವು ಕಾರ್ಯಾಚರಿಸುತ್ತಾ ಇದೆ. ಇದೀಗ ಸದ್ರಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸುಮಾರು 12 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಹಂತದಲ್ಲಿದೆ.ಅದರೆ ಅಲ್ಲಿರುವ ಸುಮಾರು 7 - 8 ಆಸ್ಪತ್ರೆ ಕೋಟ್ರಸ್ ಮತ್ತು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಸ್ಥಿತಿಯಲ್ಲಿದೆ.
ಅಲ್ಲದೆ ಸದ್ರಿ ಕಟ್ಟಡಗಳ ಸುತ್ತ ಕಾಡು ಬೆಳೆದು ಮುಚ್ಚಿ ಹೋಗಿರುತ್ತದೆ. ಇದನ್ನು ಸರಿ ಪಡಿಸಿದಲ್ಲಿ ಆಸ್ಪತ್ರೆಗೆ ಸಂಬಂಧಪಟ್ಟ ಸಿಬಂಧಿಗಳಿಗೆ ವಸತಿ ವ್ಯವಸ್ಥೆ ಅಲ್ಲದೆ ಇನ್ನಿತರ ಉಪಯೋಗಿ ಕಾರ್ಯಕ್ಕೆ ಸದ್ರಿ ಕಟ್ಟಡಗಳನ್ನು ಬಳಸಬಹುದು.
ಈ ಹಿನ್ನೆಲೆಯಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಅತೀ ಶೀಘ್ರವೇ ಸರಿ ಪಡಿಸಿ ಉಪಯೋಗ ಯೋಗ್ಯ ಕಟ್ಟಡಗಳನ್ನಾಗಿ ಮಾಡಿ ಕೊಡಬೇಕೆಂದು ಪುತ್ತೂರು ಶಾಸಕರಾದ ಅಶೋಕ ಕುಮಾರ್ ರೈ ಯವರಿಗೆ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು, ಪಾಣಾಜೆ ನಾಗರಿಕ ಸಮಿತಿ ಅಧ್ಯಕ್ಷರಾದ ಬಾಬು ರೈ ಕೋಟೆ, ಜಂಟಿಯಾಗಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ನಾಯಕ್ ಅಪಿನಿಮೂಲೆ, ಪಾಣಾಜೆ ಕಾಂಗ್ರೆಸ್ ವಲಯಾಧ್ಯಕ್ಷರಾದ ಸದಾನಂದ ನಾಯ್ಕ ಭರಣ್ಯ ಮುಖಂಡರಾದ ಅದ್ರು ಯಾನೆ ಅಬ್ದುಲ್ ಅಝೀಝ್ ಬೊಳ್ಳಿಂಬಲ, ಮುಹಮ್ಮದ್ ಕುಂಞ ಬೊಳ್ಳಿಂಬಲ ಮತ್ತಿತರರು ಉಪಸ್ಥಿತರಿದ್ದರು.