ಪಾರ್ಪಳ ಬೊಳ್ಳಿಂಬಲ ಸಂಪರ್ಕ ರಸ್ತೆಯ ಸೇತುವೆಯನ್ನು ಪುನರ್ನಿರ್ಮಾಣ ಮಾಡಿ ಕೊಡಲು ಶಾಸಕರಿಗೆ ಪಾಣಾಜೆ ಕಾಂಗ್ರೇಸ್ ಕಾರ್ಯಕರ್ತರಿಂದ ಮನವಿ

ಶಾಸಕರಿಂದ ಕೂಡಲೇ ಸ್ಪಂದನೆ 40ಲಕ್ಷ ರೂಪಾಯಿಗಳ ಅನುದಾನ ದಲ್ಲಿ ಶೀಘ್ರವೇ ಸರಿಪಡಿಸುವ ಭರವಸೆ

ಪುತ್ತೂರು: ತಾಲೂಕು ಪಾಣಾಜೆ ಗ್ರಾಮದ ಪಾರ್ಪಳ ಬೊಳ್ಳಿಂಬಲ ಸಂಪರ್ಕ ರಸ್ತೆಯ ಸೇತುವೆಯು ಇತಿಹಾಸ ಕಂಡದ್ದಾಗಿರುತ್ತದೆ ಪ್ರಸಕ್ತ ಸದ್ರಿ ಸೇತುವೆಯು ಮುರಿದು ಬೀಳುವ ಸ್ಥಿತಿಯಲ್ಲಿದೆ ಮಾತ್ರವಲ್ಲದೆ ಸದ್ರಿ ಸೇತುವೆ-ಅಪಾಯದಿಂದ ಕೂಡಿರುತ್ತದೆ. ಸದ್ರಿ ರಸ್ತೆ ಮೂಲಕ ಶಾಲಾ ಮಕ್ಕಳು ಪ್ರಾಯಸ್ಥರು ಮಹಿಳೆಯರು ಅನಾರೋಗ್ಯ ಪೀಡಿತರು ಸೇರಿದಂತೆ ದೈನಂದಿನ ಕಾರ್ಯಕ್ಕೆ ಸದಾ ಉಪಯೋಗಿಸುತ್ತಿರುವ ರಸ್ತೆ ಇದಾಗಿರುತ್ತದೆ. 

ಈ ಹಿನ್ನೆಲೆಯಲ್ಲಿ ಸದ್ರಿ ಪಾರ್ಪಳ ಬೊಳ್ಳಿಂಬಲ ಸಂಪರ್ಕ ರಸ್ತೆಯ ಸೇತುವೆಯನ್ನು ಅತೀ ಶೀಘ್ರವಾಗಿ ಪುನರ್ ನಿರ್ಮಾಣ ಮಾಡಿ ಕೊಟ್ಟು ಯೋಗ್ಯ ರಸ್ತೆಯನ್ನಾಗಿ ಮಾಡಿ ಕೊಡಬೇಕೆಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರಿಗೆ ಪಾಣಾಜೆ ಕಾಂಗ್ರೇಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು.ಸದ್ರಿ ಮನವಿಗೆ ಕೂಡಲೇ ಸ್ಪಂದಿಸಿದ ಶಾಸಕರು 40 ಲಕ್ಷ ರೂಪಾಯಿಗಳ ಅನುದಾನ ಒದಗಿಸುವುದಾಗಿ ಭರವಸೆಯನ್ನು ನೀಡಿದರು. 


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಾಬು ರೈ ಕೋಟೆ, ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು, ಅದ್ರು ಯಾನೆ ಅಬ್ದುಲ್ ಅಝೀಝ್ ಬೊಳ್ಳಿಂಬಲ, ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ನಾಯಕ್ ಅಪ್ಪಿನಿಮೂಲೆ, ಕಾಂಗ್ರೆಸ್ ವಲಯಾಧ್ಯಕ್ಷ ಸದಾನಂದ ನಾಯ್ಕ ಭರಣ್ಯ,ಮುಹಮ್ಮದ್ ಕುಂಞ ಬೊಳ್ಳಿಂಬಲ ಮತ್ತಿತರರು ಉಪಸ್ಥಿತರಿದ್ದರು.
Next Post Previous Post

Advertisement

```
Ad 1

Advertisement

Advertisement

Advertisement