ಪುತ್ತೂರು: ಕಿರಣ್ ಚಂದ್ರ ರೈ ಇವರಿಗೆ ಡಾಕ್ಟರೇಟ್ ಪದವಿ
ಪುತ್ತೂರು: ಶ್ರೀ ಕಿರಣಚಂದ್ರ ರೈ.ಬಿ. ಇವರು ಡಾ. ಆನಂದ ಗೌಡ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ "ಸ್ವಾತಂತ್ರೋತ್ತರ ಭಾರತದಲ್ಲಿ ಗಾಂಧಿ ತತ್ವಗಳ ಅನುಷ್ಠಾನದ ವಿಶ್ಲೇಷಣೆ : ವಿಶೇಷವಾಗಿ ಪುತ್ತೂರಿಗೆ ಸಂಬಂಧಿಸಿದಂತೆ ಒಂದು ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಡಾಕ್ಟರೇಟ್ ಪದವಿ ನೀಡಿದೆ.
ಇವರು ಕರ್ನೂರು ಬಂಟುಕಲ್ಲು ವೆಂಕಪ್ಪ ರೈ ಹಾಗೂ ಮಮ್ಮಕ್ಕೆ ರೈ ಅವರ ಪುತ್ರ. ಇವರು ಪ್ರಸ್ತುತ ಬೆಟ್ಟಂಪಾಡಿ ಹಾಗೂ ವಿದ್ಯಾರಶ್ಮಿ ಪದವಿ ಕಾಲೇಜ್ನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.