DKSC UAE ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಎಸ್ ಯೂಸುಫ್ ಹಾಜಿ ಆರ್ಲಪದವು ರವರಿಗೆ ಜಿದ್ದಾದಲ್ಲಿ ಸನ್ಮಾನ
ಪುತ್ತೂರು: ದಕ್ಷಿಣ ಕರ್ನಾಟಕ ಸುನ್ನಿ ಸಂಟರ್ (ರಿ) ಮಂಗಳೂರು ಇದರ ಮಕ್ಕತುಲ್ ಮುಕರ್ರಮ ವಲಯ ಸಮಿತಿಯು ಪವಿತ್ರ ಹಜ್ಜ್ ನಿರ್ವಹಿಸಿ ಜಿದ್ದಾಗೆ ಆಗಮಿಸಿದ ಅಲ್ಲಾಹನ ಅತಿಥಿಯಾದ DKSC UAE ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷರಾದ ಎಸ್ ಯೂಸುಫ್ ಹಾಜಿ ಆರ್ಲಪದವು ರವರನ್ನು ನಗರದ ಅಲ್ ಖಯಾಲ್ ಹೋಟೆಲ್ ನಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.
ಈ ಸಂದರ್ಭ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು,ಕೇಂದ್ರ ಸಮಿತಿ ಲೆಕ್ಕಪರಿಶೋದಕರಾದ ಇಸ್ಮಾಯಿಲ್ ಅರಮೆಕ್ಸ್ ,ಅಲ್ ಹಸಾ ಯುನಿಟ್ ಅಧ್ಯಕ್ಷರಾದ ಸಲೀಂ ಉಕ್ಕಡ, ಡೆವಲೆಪ್ಮೆಂಟ್ ಚಯರ್ಮೆನ್ ಬಶೀರ್ ಅಡ್ಕಾರ್ ,ಮಕ್ಕಾ ವಲಯ ನೇತಾರರಾದ ರಫೀಕ್ ಎರ್ಮಾಲ್ , ಅಬ್ದುಲ್ ಮಜೀದ್ ಕಣ್ಣಂಗಾರ್ ಉಪಸ್ಥಿತರಿದ್ದರು.