ನೆಲ್ಯಾಡಿಯಲ್ಲಿ ಮಾಸಿಕ ಮಹ್ಳರತುಲ್ ಬದ್ರಿಯಾ, ಶರಫುಲ್ ಉಲಮಾ & ಪೋಸೋಟ್ ತಂಙ್ಙಲ್ ಅನುಸ್ಮರಣೆ


ನೆಲ್ಯಾಡಿ: SSF ನೆಲ್ಯಾಡಿ ಶಾಖೆಯ ವತಿಯಿಂದ SYS,KMJ,KCF  ಸಹಯೋಗದೊಂದಿಗೆ ಶೈಖುನಾ ಸುಲ್ತಾನುಲ್ ಉಲಮಾರ ಇಜಾಝತ್ ಪ್ರಕಾರ ಮಾಸಂಪ್ರತಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಶರಫುಲ್ ಉಲಮಾ & ಪೋಸೋಟ್ ತಂಙ್ಙಲ್ ಅನುಸ್ಮರಣೆ ಮಜ್ಲಿಸ್ ನೆಲ್ಯಾಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು,


 ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕದ ಪ್ರಮುಖ ಪ್ರಭಾಷಣಗಾರ,ಎಸ್.ವೈ.ಎಸ್ ಕಡಬ ಝೋನ್ ದಅವಾ ಉಪಾಧ್ಯಕ್ಷರೂ ಆದಂತಹ ಬಹು|ಉಸ್ಮಾನ್ ಜೌಹರಿ ಉಸ್ತಾದ್ ನೆಲ್ಯಾಡಿ ವಹಿಸಿದ್ದರು, ಅಧ್ಯಕ್ಷತೆಯನ್ನು ಎಸ್.ಎಸ್.ಎಫ್ ಅಧ್ಯಕ್ಷರಾದ ಜಿ.ಎಚ್ ಮುಹಮ್ಮದ್ ಸುಲ್ತಾನ್ ವಹಿಸಿದ್ದರು, ಕೆ.ಎಂ.ಜೆ ಅಧ್ಯಕ್ಷರಾದಂತಹ ಬಹು| ಹಸೈನಾರ್ ಉಸ್ತಾದ್ ಆರಂಭಿಕ ದುಆ ನೇತೃತ್ವ ನಿರ್ವಹಿಸಿದರು.






ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉಸ್ಮಾನ್ ಜೌಹರಿ ಉಸ್ತಾದ್ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನ ಮಹತ್ವವನ್ನು ವಿವರಿಸಿ,ಖುರ್ರತುಸ್ಸಾದಾತ್ ಕೂರ ತಂಙ್ಙಲರ 1ನೇ ಉರೂಸ್ ಮುಬಾರಕ್ ಕಾರ್ಯಕ್ರಮದ ಯಶಸ್ಸಿಗಾಗಿ ತಮ್ಮಿಂದ ಸಾಧ್ಯವಿರುವಷ್ಟು ಶ್ರಮ ಪಡಬೇಕು ಎಂದು ನಿರ್ದೇಶಿಸಿದರು.




ಕಾರ್ಯಕ್ರಮದಲ್ಲಿ ಜೂನ್ 26,27,28,29 ರಂದು ಫಝಲ್ ನಗರ ಕೂರತ್ ನಲ್ಲಿ ನಡೆಯಲಿರುವ ಖುರ್ರತುಸ್ಸಾದಾತ್ ಕೂರ ತಂಙ್ಙಲರ 1ನೇ ಉರೂಸ್ ಮುಬಾರಕ್ ಹಾಗೂ ಜೂನ್ 19,20,21,22 ರಂದು ಮಂಜೇಶ್ವರ ಮಳ್ಹರ್ ಕ್ಯಾಂಪಸ್ ನಲ್ಲಿ ನಡೆಯಲಿರುವ ಮಳ್ಹರ್ ಸಿಲ್ವರ್ ಜುಬಿಲಿ ಹಾಗೂ ಪೋಸೋಟ್ ತಂಙ್ಙಲರ 10ನೇ ಉರೂಸ್ ಮುಬಾರಕ್ ಪ್ರಚಾರಾರ್ಥವಾಗಿ SSF,SYS,KMJ ನಾಯಕರಿಂದ ಪೋಸ್ಟರ್ ಪ್ರದರ್ಶನ ಮಾಡಲಾಯಿತು.



ಕಾರ್ಯಕ್ರಮದಲ್ಲಿ ಬಿ.ಜೆ.ಎಂ ಜುಮಾ ಮಸೀದಿ ನೆಲ್ಯಾಡಿ ಇದರ ಆಡಳಿತ ಸಮಿತಿಯ ಅಧ್ಯಕ್ಷರೂ ನೆಲ್ಯಾಡಿ ಕೆ.ಎಂ.ಜೆ ನಾಯಕರೂ ಆದಂತಹ ಎನ್.ಎಸ್ ಸುಲೈಮಾನ್ ಹಾಜಿ,ಎಸ್.ವೈ.ಎಸ್ ನೆಲ್ಯಾಡಿ ಶಾಖೆಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಿ.ಎಂ,ಎಸ್.ಎಸ್.ಎಫ್ ನೆಲ್ಯಾಡಿ ಸೆಕ್ಟರ್ ಅಧ್ಯಕ್ಷರಾದಂತಹ ಅನ್ಸೀಫ್ ಸಅದಿ,ಎಸ್.ಎಸ್.ಎಫ್ ಕಡಬ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಸುಹೈಲ್,ಎಸ್.ಎಸ್.ಎಫ್ ನೆಲ್ಯಾಡಿ ಶಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಝಹೀಂ,ಕ್ಯೂಡಿ ಕಾರ್ಯದರ್ಶಿ ಮುಹಮ್ಮದ್ ತುಫೈಲ್,ಕ್ಯೂಡಿ ಕನ್ವೀನರ್ ಸವಾದ್ ,ಎಸ್.ವೈ.ಎಸ್ ಸದಸ್ಯರಾದಂತಹ ಇಸ್ಮಾಯಿಲ್ ಆಶಿಕ್,ಗಫ್ಫಾರ್,ರಝ್ಝಾಕ್, ರಹಿಮಾನ್ ಹಾಗೂ SSF,SYS,KMJ ಯ ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಜುಲೈ 20 ರಂದು ಅರ್ಧ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಖಾಝಿ ಅಸ್ಸೈಯ್ಯದ್ ಖುರ್ರತುಸ್ಸಾದಾತ್ ಕೂರ ತಂಙ್ಙಲರ 1ನೇ ಆಂಡ್ ನೇರ್ಚೆ ನೆಲ್ಯಾಡಿ ಸುನ್ನೀ ಸೆಂಟರ್ ನಲ್ಲಿ ನಡೆಯಲಿರುವುದು ಎಂದು ಘೋಷಿಸಲಾಯಿತು.
Next Post Previous Post
ಜಾಹೀರಾತು

Advertisement

Advertisement

```

Advertisement

Advertisement