BREAKING ಸ್ಪೀಕರ್ ಪೀಠಕ್ಕೆ ಅಗೌರವ: ವಿಧಾನಸಭೆ ಕಲಾಪದಿಂದ 6 ತಿಂಗಳವರೆಗೆ 18 ಬಿಜೆಪಿ ಸದಸ್ಯರ ಅಮಾನತು
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸ್ಪೀಕರ್ ಪೀಠಕ್ಕೆ ಅಗೌರವ ಆರೋಪದಡಿ ಬಿಜೆಪಿಯ 18 ಶಾಸಕರನ್ನು ಅಧಿವೇಶನದಿಂದ ಅಮಾನತು ಮಾಡಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.
ಅಮಾತ್ತುಗೊಂಡ ಶಾಸಕರು!
ಈ ಕ್ಷಣದಿಂದ ಜಾರಿಯಾಗುವಂತೆ, ಬರೋಬ್ಬರಿ 6 ತಿಂಗಳುಗಳ ಕಾಲ ಬಿಜೆಪಿಯ 18 ಮಂದಿ ಶಾಸಕರು ಅಮಾನತ್ತು ಮಾಡಲಾಗಿದೆ. 1- ದೊಡ್ಡಣ್ಣ ಗೌಡ ಪಾಟೀಲ್, 2- ಸಿ ಕೆ ರಾಮಮೂರ್ತಿ, 3- ಅಶ್ವತ್ಥ ನಾರಾಯಣ, 4- ಎಸ್ ಆರ್ ವಿಶ್ವನಾಥ್, 5 - ಬೈರತಿ ಬಸವರಾಜ, 6- ಎಂ ಆರ್ ಪಾಟೀಲ್, 7- ಚನ್ನಬಸಪ್ಪ, 8- ಬಿ ಸುರೇಶ್ ಗೌಡ, 9- ಉಮನಾಥ್ ಕೋಟ್ಯಾನ್.
ಬಿಜೆಪಿ 18 ಸದಸ್ಯರು ಅಮಾನತ್ತು
ಹಾಗೂ 10- ಶರಣು ಸಲಗಾರ್, 11- ಶೈಲೇಂದ್ರ ಬೆಲ್ದಾಳೆ, 12- ಯಶಪಾಲ್ ಸುವರ್ಣ, 13- ಹರೀಶ್ ಬಿಪಿ, 14- ಡಾ. ಭರತ್ ಶೆಟ್ಟಿ, 15- ಮುನಿರತ್ನ, 16- ಬಸವರಾಜ ಮತ್ತಿಮೋಡ್, 17 -ಧೀರಜ್ ಮುನಿರಾಜು, 18- ಡಾ ಚಂದ್ರು ಲಮಾಣಿ ಅಮಾನತ್ತುಗೊಂಡ ಶಾಸಕರಾಗಿದ್ದಾರೆ.
ಸ್ಪೀಕರ್ ಯುಟಿ ಖಾದರ್ ಅವರು, ಸದಸ್ಯರನ್ನು ಅಮಾನತ್ತು ಮಾಡುತ್ತಿದ್ದಂತೆ ಸದನದ ಒಳಗೆ ಹಾಜರಾದ ಮಾರ್ಷಲ್ಗಳ ಗುಂಪು ಅಮಾನತ್ತುಗೊಂಡ ಶಾಸಕರನ್ನು ಹೊರಗೆ ಕಳುಹಿಸಲು ಮುಂದಾದರು.