ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರಿಗೆ SDPI ಚಾರ್ಮಾಡಿ ಗ್ರಾಮ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ಮೌನ ಪ್ರಾರ್ಥನೆ
ಮಂಗಳೂರು: ಚಾರ್ಮಾಡಿ SDPI ಗ್ರಾಮ ಸಮಿತಿ ಇದರ ವತಿಯಿಂದ ರಹೀಮ್ ಬೀಟಿಗೆ ಇವರ ಅಧ್ಯಕ್ಷ ತೆಯಲ್ಲಿ ನೆಡೆದ ಪ್ರತಿಭಟನೆ ಕಾಶ್ಮೀರದ ಪಾಹಲ್ಗಮ್ ನಲ್ಲಿ ನಡೆದಂತಹ ಉಗ್ರರ ದಾಳಿಯಿಂದ ಬಲಿಯಾದಂತಹ ಎಲ್ಲಾ ಹುತಾತ್ಮರ ಸ್ಮರಿಸುವ ಮೂಲಕ ಮೇಣದಬತ್ತಿ ಇಡುವ ಮೂಲಕ ಮೌನ ಪ್ರಾರ್ಥನೆ ನಡೆಸಲಾಯಿತು.
ಸಂದರ್ಭದಲ್ಲಿ ಕೆಲವೊಂದು ಸಂಘ ಸಂಸ್ಥೆಯ ನಾಯಕರುಗಳು ರಾಜಕೀಯ ಮುಖಂಡರುಗಳು ಭಾಗವಹಿಸಿದರು ಈ ಪ್ರತಿಭಟನೆ ಯನ್ನು ಉದ್ದೇಶಿಸಿ ಆಶ್ರಫ್ ಚಾರ್ಮಾಡಿ ಯವರು ಮಾತನಾಡಿದರು
ಯಾವುದೇ ಉಗ್ರಗಾಮಿ ಚಟುವಟಿಕೆಯನ್ನು ನಾವು ಒಪ್ಪುವುದಿಲ್ಲ ಅದನ್ನು ಬಹಳ ಕಠಿಣ ಶಬ್ದಗಳಿಂದ ಟೀಕಿಸುತ್ತೇವೆ ಯಾವ ಧರ್ಮವು ಕೂಡ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ ಉಗ್ರಗಾಮಿಗಳಿಗೆ ಯಾವುದೇ ಧರ್ಮವಿಲ್ಲ ಅದನ್ನು ಈ ದೇಶದ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ವಿರೋಧಿಸಬೇಕು ಹಾಗೂ ಕೇಂದ್ರ ಸರ್ಕಾರ ಆದಷ್ಟು ಬೇಗ ಉಗ್ರಗಾಮಿಗಳನ್ನು ಸದೆಬಡಿಯನ್ನು ಮೂಲಕ ಅವರನ್ನು ಕಠಿಣವಾಗಿ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ಒಂದು ದಾಳಿಯು ಈ ದೇಶದಲ್ಲಿ ಮುಂದಕ್ಕೆ ನಡೆಯಬಾರದು ಅದಕ್ಕೆ ಬೇಕಾಗುವಂತಹ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆಯುವ ಮುಖಾಂತರ ಈ ದೇಶವನ್ನು ರಕ್ಷಿಸಬೇಕು.
ಉಗ್ರರಿಗೆ ತಕ್ಕ ಪಾಠವನ್ನು ಆದಷ್ಟು ಬೇಗ ಕೊಡುವ ಮುಖಾಂತರ ಈ ದೇಶಕ್ಕೆ ಒಂದು ಉತ್ತಮವಾದ ಸಂದೇಶವನ್ನು ನೀಡಬೇಕು ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಅವರ ಕುಟುಂಬಕ್ಕೆ ಈ ಒಂದು ಆಘಾತವನ್ನು ಸಹಿಸುವ ಶಕ್ತಿ ಇರಲಿ ಎಂದು ಪ್ರಾರ್ಥಿಸಲಾತು