ದುಶ್ಚಟ, ಜೂಜಾಟ ಗಳಿಂದ ಹೊರಬರಲು ಜ್ಯೋತಿಷ್ಯರ ಸಲಹೆಯು ಒಂದು ಮಾರ್ಗ - -ಶಿವಪ್ರಸಾದ್ ಭಾರದ್ವಾಜ್ ಜ್ಯೋತಿಷ್ಯರು


ಪುತ್ತೂರು: ವಿದ್ಯಾವಂತ, ಪ್ರಜ್ಞಾವಂತ ಸಮಾಜದಲ್ಲಿ ಜೂಜಾಟಗಳ ಹಾಗೂ ದುಶ್ಚಟಗಳ ರೀತಿ ಬದಲಾಗಿದೆ ಅದರ ಜಾಹಿರಾತುಗಳ ರೀತಿಯೂ ಬದಲಾಗಿದೆ. 
ಕ್ಷಿಪ್ರವಾಗಿ ಹಾಗೂ ದುಡಿಯದೆಯೇ ದುಡ್ಡು ಮಾಡುವ ಧಾವಂತದಲ್ಲಿ ಇಂದಿನ ಯುವ ಜನತೆ ಆನ್ ಲೈನ್ ಗೇಮ್ ಎಂಬ ಮಾಯಾವಿಯ ಗೆಳೆತನ ಬೆಳೆಸಿ ದುಡ್ಡು ಸುರಿದು ಆಡಿ ಸೋತು ಕೊನೆಗೆ ಮನೆಯವರ ಚಿನ್ನ,  ಆಸ್ತಿ ಎಲ್ಲವೂ ಕಳೆದುಕೊಳ್ಳುವವರೆಗೂ ಈ ಹುಚ್ಚಾಟ ನಿಲ್ಲಿಸದೆ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ಸಾಕಷ್ಟು ಉದಾಹರಣೆಗಳು ನಮಗೆ ಕಾಣಸಿಗುತ್ತಿವೆ. 


ಈ ಜೂಜಾಟಗಳು ಯುವ ಜನತೆಯನ್ನು ಕಂಗಾಲು ಮಾಡುವುದರ ಜೊತೆಗೆ ಹೆತ್ತವರ ಬದುಕನ್ನು ಕರಾಳತೆಗೆ ದೂಡುತ್ತಿದೆ. ಇತ್ತ ಆತಂಕ,  ಭಯ,  ಖಿನ್ನತೆಗೆ ಒಳಗಾದವರು  ನೋವನ್ನು ಮರೆಯಲು ಗಾಂಜಾ, ಸಿಗರೇಟು, ಮದ್ಯಪಾನದಂತಹ ಅಮಲು ಪದಾರ್ಥಗಳ ಸೇವನೆಯಿಂದ ಅರೋಗ್ಯ ಜೊತೆಗೆ ಬದುಕನ್ನು ಕೊನೆಗಾಣಿಸಲು ಕಾರಣವಾಗುತ್ತಿದೆ. ಕಾಲೇಜು ಶಿಕ್ಷಣದಲ್ಲಿ ಈ ಕುರಿತು ಅರಿವು ಮೂಡಿಸಬೇಕಾದ ಅನಿವಾರ್ಯತೆ ಇಂದಿನ ಶಿಕ್ಷಣ ವ್ಯವಸ್ಥೆಯ ಮುಂದಿದೆ. 


 ಎಲ್ಲರ ಕೈಯಲ್ಲೂ  ಮೊಬೈಲ್ ಇದ್ದರೂ ಕೆಲವರು ಮಾತ್ರವೇ ಏಕೆ ಈ ಗೇಮ್ ಆಡುತ್ತಾರೆ ಹಾಗೂ ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ?


ಜಾತಕದಲ್ಲಿ ರಾಹು ಗ್ರಹದ  ನಕಾರಾತ್ಮಕ ಪ್ರಭಾವವು ಅದೃಷ್ಟದ ಆಟಗಳಿಂದ ಗೆಲ್ಲಬಲ್ಲೆ ಎಂಬ ಹುಚ್ಚು ಆಲೋಚನೆಯು ಹುಟ್ಟಿಕೊಳ್ಳುವಂತೆ ಮಾಡಬಲ್ಲದು. ಮತ್ತು ಕರ್ಮಗಳನ್ನು ಅನುಭವಿಸಲು ಅವಕಾಶವನ್ನು ಮಾಡಿಕೊಡುವ ಶನಿ ಪ್ರಭಾವಿತ ಅವಧಿಗಳು. 
ಜೂಜಾಟಕ್ಕೆ ಒಳಗಾದವರ ಅಥವಾ ದುಶ್ಚಟಗಳಿಗೆ ಬಲಿಯಾಗುತ್ತಿರುವವರ ಜಾತಕಗಳನ್ನು ವಿಮರ್ಶೆ ಮಾಡಿ ಸೂಕ್ತವಾದ ಪರಿಹಾರ(ವೈಜ್ಞಾನಿಕವಾದ ರೀತಿಯಲ್ಲಿ ) ಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಬದುಕನ್ನು ಬದಲಾಯಿಸಿಕೊಳ್ಳುವುದು
ಒಳಿತು...



ಶಿವಪ್ರಸಾದ್ ಭಾರದ್ವಾಜ್ ಜ್ಯೋತಿಷ್ಯರು 9448410257 
Next Post Previous Post
ಜಾಹೀರಾತು

Advertisement

Advertisement

ಜಾಹೀರಾತು ```
```

Advertisement

Advertisement