ಚಂದ್ರಶೇಖರ್ ಭಟ್ ಕೋಟೆಮುಂಡುಗಾರು ಇವರಿಗೆ ಜಿಲ್ಲಾ ಮಟ್ಟದ ‘ಸೇವಾರತ್ನ ಪ್ರಶಸ್ತಿ’
ಪುತ್ತೂರು: ಚಂದ್ರಶೇಖರ್ ಭಟ್ ಕೋಟೆಮುಂಡುಗಾರು ಇವರಿಗೆ ಜಿಲ್ಲಾ ಮಟ್ಟದ ‘ಸೇವಾರತ್ನ ಪ್ರಶಸ್ತಿ’ ಜೂ.13ರಂದು ಪುರೋಹಿತರಾಗಿರುವ ಚಂದ್ರಶೇಖರ್ ಭಟ್ ಕೋಟೆಮುಂಡುಗಾರು ಇವರಿಗೆ ಆಕ್ಸಿಸ್ ಬ್ಯಾಂಕ್ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ‘ಸೇವಾರತ್ನ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
ಟ್ರಿನಿಟಿ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಆಕ್ಸಿಸ್ ಬ್ಯಾಂಕ್ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ನ ಕೇಂದ್ರ ಕಛೇರಿಯಲ್ಲಿ ಸಮಾಜದ ಅನೇಕ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪೌರೋಹಿತ್ಯದ ಜೊತೆಗೆ ಬಡವರಿಗೆ ಮನೆ, ವಿದ್ಯಾಭ್ಯಾಸಕ್ಕೆ ಧನ ಸಹಾಯ ಇತ್ಯಾದಿ ಸಮಾಜಮುಖಿ ಸಹಕಾರವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.