BREAKING : ಪಹಲ್ಗಾಮ್ ಉಗ್ರರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ: ಪಾಕ್ ರಕ್ಷಣಾ ಸಚಿವ
ನವದೆಹಲಿ : ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ನೆರೆರಾಷ್ಟ್ರ ಹಾಗೂ ಭಯೋತ್ಪಾದಕರ ತವರಾದ ಪಾಕಿಸ್ತಾನ ಮೊದಲ ಬಾರಿ ಪ್ರತಿಕ್ರಿಯೆ ನೀಡಿದೆ. ಉಗ್ರರ ದಾಳಿಗೆ ನಮ್ಮನ್ನು ದೂಷಿಸಬೇಡಿ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆ ನೀಡಿದ್ದಾರೆ.
ಇದು ಭಾರತದಲ್ಲಿಯೇ ಬೆಳೆದ ಉಗ್ರರ ಹಿಂಸಾಚಾರ ಕೃತ್ಯವಾಗಿದೆ. ತಮ್ಮ ನೆಲಕ್ಕಾಗಿ ಹೋರಾಡುತ್ತಿರುವ ಕ್ರಾಂತಿಕಾರಿ ಪಡೆಗಳಿಂದ ಈ ಭಯೋತ್ಪಾದಕ ಕೃಯ ನಡೆದಿದೆ ಎಂದು ಆಸಿಫ್ ಹೇಳಿದ್ಧಾರೆ.
ಪಾಕಿಸ್ತಾನಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಭಾರತದ ಕೆಲವು ಪ್ರದೇಶಗಳಲ್ಲಿ ಕ್ರಾಂತಿ ಎಂದು ಹೇಳಿಕೊಳ್ಳುತ್ತಿರುವ ಸ್ವದೇಶಿ ಪಡೆಗಳು ಉದ್ಭವವಾಗುತ್ತಿದೆ. ನಾಗಾಲ್ಯಾಂಡ್, ಕಾಶ್ಮೀರ್, ಮಣಿಪುರ, ಛತ್ತಿಸಗಡ ಹಾಗೂ ದಕ್ಷಿಣ ಭಾರತದ ದೇಶಗಳಲ್ಲಿ ಸ್ಥಳೀಯ ಭಯೋತ್ಪಾದಕ ಸಂಘಟನೆಗಳು ತಲೆಯೆತ್ತುತ್ತಿವೆ ಎಂದು ಖವಾಜಾ ಆಸಿಫ್ ಹೇಳಿದ್ದಾರೆ.
"ಇದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದೆಲ್ಲವೂ ಸ್ವದೇಶಿಯಾಗಿ ಬೆಳೆದದ್ದು, ಭಾರತದ ವಿರುದ್ಧ ಒಂದಲ್ಲ, ಎರಡಲ್ಲ, ಡಜನ್ಗಟ್ಟಲೆ ವಿವಿಧ ರಾಜ್ಯಗಳಲ್ಲಿ ಕ್ರಾಂತಿಗಳು ನಡೆದಿವೆ, ನಾಗಾಲ್ಯಾಂಡ್ನಿಂದ ಕಾಶ್ಮೀರದವರೆಗೆ, ದಕ್ಷಿಣದಲ್ಲಿ, ಛತ್ತೀಸ್ಗಢದಲ್ಲಿ, ಮಣಿಪುರದಲ್ಲಿ. ಈ ಎಲ್ಲಾ ಸ್ಥಳಗಳಲ್ಲಿ, ಭಾರತ ಸರ್ಕಾರದ ವಿರುದ್ಧ ಕ್ರಾಂತಿಗಳು ನಡೆದಿವೆ" ಎಂದು ಅವರು ಪ್ರತಿಪಾದಿಸಿದರು.
ಆಸಿಫ್ ಹೆಸರಿಸಿದ ಬಹುತೇಕ ಎಲ್ಲಾ ಸ್ಥಳಗಳು ಕಳೆದ ದಶಕಗಳಲ್ಲಿ ಪ್ರತ್ಯೇಕತಾವಾದಿ ಅಥವಾ ದಂಗೆಕೋರ ಚಳುವಳಿಗಳಿಗೆ ಸಾಕ್ಷಿಯಾಗಿದ್ದರೂ, ಹೆಚ್ಚಿನ ರಾಜ್ಯಗಳಲ್ಲಿ ಅಂತಹ ಚಟುವಟಿಕೆಗಳನ್ನು ಹೆಚ್ಚಾಗಿ ಭಾರತೀಯ ಅಧಿಕಾರಿಗಳು ನಿಯಂತ್ರಿಸಿದ್ದಾರೆ.