ಇರಾನ್ ನಮ್ಮನ್ನು ಕ್ಷಮಿಸಿ, ಯುದ್ಧ ನಿಲ್ಲಿಸಿ, ಶಾಂತಿ ಕೋರಿದ - ಇಸ್ರೇಲ್ ಪ್ರಜೆಗಳು
ಇರಾನ್ ನಮ್ಮನ್ನು ಕ್ಷಮಿಸಿ, ಯುದ್ಧ ನಿಲ್ಲಿಸಿ, ಶಾಂತಿ ಕೋರಿದ - ಇಸ್ರೇಲ್ ಪ್ರಜೆಗಳು ವಿಡಿಯೋ ವೈರಲ್
ಇಸ್ರೇಲ್ - ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ನಡುವೆ ಇರಾನ್ ಮಿಲಿಟರಿ ನೆಲೆ ಮತ್ತು ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿತು. ಇದರಿಂದ ಸೊರೊಕಾ ಆಸ್ಪತ್ರೆ ಕಟ್ಟಡಕ್ಕೆ ಭಾರಿ ಹಾನಿಯಾಗಿತ್ತು ಇದನ್ನು ಪರಿಶೀಲಿಸಲು ಬಂದಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಲ್ಲಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಇರಾನ್ ನಡೆಸಿದ ದಾಳಿಯಿಂದ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ ಇದಕ್ಕೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ ಜೊತೆಗೆ ಈ ಸಂಘರ್ಷದಿಂದ ನಾನು ನನ್ನ ಮಗನ ಮದುವೆಯನ್ನು ಎರಡನೇ ಬಾರಿಗೆ ಮುಂದೂಡಿದ್ದೇನೆ ಇದು ದೇಶಕ್ಕಾಗಿ ನಾನು ಮಾಡಿದ ತ್ಯಾಗ ಎಂದು ನೆತನ್ಯಾಹು ಹೇಳಿದರು.
ಇರಾನ್ ನಡುವಿನ ಸಂಘರ್ಷದಲ್ಲಿ ನಾನು ವೈಯಕ್ತಿಕವಾಗಿ ನಷ್ಟವನ್ನು ಅನುಭವಿಸಿದ್ದೇನೆ ಜೊತೆಗೆ ನನ್ನ ಪತ್ನಿ ಮಾನಸಿಕ ಯಾತನೆಯನ್ನೂ ಅನುಭವಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.
ನೆತನ್ಯಾಹು ಹೇಳಿಕೆಗೆ ನಾಗರಿಕರು ಗರಂ:
ಇನ್ನು ಪ್ರಧಾನಿ ತನ್ನ ಮಗನ ಮದುವೆ ಮುಂದೂಡಿದ ವಿಚಾರವನ್ನು ಪತ್ರಕರ್ತರ ಮುಂದೆ ಪ್ರಸ್ತಾಪಿಸುತ್ತಿದ್ದಂತೆ ಇಸ್ರೇಲ್ ನಾಗರಿಕರು ಆಕ್ರೋಶ ಹೊರ ಹಾಕಿದ್ದಾರೆ ದೇಶದಲ್ಲಿ ಯುದ್ಧ ನಡೆಯುತ್ತಿದ್ದರೆ ಪ್ರಧಾನಿಗೆ ಮಗನ ಮದುವೆ ಮುಂದೂಡಿದ ಚಿಂತೆ ದೇಶಕ್ಕಾಗಿ ಜನ ಸಾಯುತ್ತಿದ್ದಾರೆ ಆದರೆ ಪ್ರಧಾನಿಗೆ ಮಾತ್ರ ತನ್ನ ಕುಟುಂಬ ಸದಸ್ಯರ ಚಿಂತೆ ಮಾತ್ರ ದೊಡ್ಡದಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೆತನ್ಯಾಹು ತಮ್ಮ ಮಗ ಅವರ್ ಮದುವೆಯನ್ನು ಕಳೆದ ನವೆಂಬರ್ನಲ್ಲಿ ನಡೆಸಲು ಯೋಜಿಸಿದ್ದರು ಆದರೆ ಕಾರಣಾಂತರಗಳಿಂದ ಅದನ್ನು ಮುಂದೂಡಲಾಯಿತು ಇದಾದ ಬಳಿಕ ಇದೇ ತಿಂಗಳು ನಡೆಸಲು ನಿರ್ಧರಿಸಲಾಯಿತು ಆದರೆ ಯುದ್ಧದ ಕಾರಣ ಅದನ್ನೂ ಮುಂದೂಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಮತ್ತು ಇಸ್ರೇಲ್ ನಲ್ಲಿ ಯುದ್ಧದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ ಇಲ್ಲಿಯವರೆಗಿನ ಯುದ್ಧ ವಾತಾವರಣದಿಂದ ಮುಕ್ತಿಗೊಳ್ಳಬೇಕೆಂಬ ಆಶಯದಿಂದ ಇಸ್ರೇಲ್ ಪ್ರಜೆಗಳು ಇರಾನ್ ಬಳಿ ಕ್ಷಮಿಸಿ ಯುದ್ಧ ನಿಲ್ಲಿಸಿ ಶಾಂತಿಯನ್ನು ನೀಡಿ ಎಂದು ಯುದ್ಧವಿರಮಕ್ಆಶಿಸುತ್ತಿದ್ದಾರೆ