Puttur: ತಪಸ್ಯ ಅಭಿನಯ ಕೇಂದ್ರ ಉದ್ಘಾಟನೆ
ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ವಿಧತ್ ಅಕಾಡೆಮಿ ಅರ್ಪಿಸುವ ತಪಸ್ಯ ಅಭಿನಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜೂ:22ಭಾನುವಾರ ನಡೆಯಿತು
ಕಾರ್ಯಕ್ರಮವನ್ನು,ತುಳುನಾಡ ಕಲಾ ಚತುರ ಕೇಶವ ಮಚ್ಚಿಮಲೆ ಜಿಲ್ಲಾ ತಾಲೂಕು ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು ಸುದ್ದಿ ಬಿಡುಗಡೆ ಪ್ರತಿಭಾರಂಗದ ಅಂಕಣಕಾರರು ನಾರಾಯಣ ರೈ ಕುಕ್ಕುವಳ್ಳಿ ವಹಿಸಿ ಮಾತನಾಡುತ್ತ "ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ, ಅವರ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವಂತಾಗ ಬೇಕು. ಈ ನಿಟ್ಟಿನಲ್ಲಿ ತಪಸ್ಯ ಅಭಿನಯ ಕೇಂದ್ರ ಕಾರ್ಯೋನ್ಮುಖ ವಾಗಲಿ.." ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪಿರ್ಕಿಲು ತುಳು ಚಲನಚಿತ್ರದ ನಾಯಕ ನಟ ಹಾಗೂ ಕಿರುತೆರೆಯ ಯುವ ನಟ, ಸುದೇಶ್ ರೈ ತೊಟ್ಲ,ರಂಗ ನಿರ್ದೇಶಕರು ರಂಗಾಯಣ ರಾಕೇಶ್, ವಿದತ್ ಅಕಾಡೆಮಿ ಪುತ್ತೂರು ಇದರ ಸಂಸ್ಥಾಪಕರು ಶ್ರೀವಾತ್ಸ, ರಂಗ ನಿರ್ದೇಶಕರು ಪತ್ರಕರ್ತರು ಆಗಿರುವ ಮೌನೇಶ್ ವಿಶ್ವಕರ್ಮ, ಅತಿಥಿಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಕೋರಿದರು.
ತಪಸ್ಯ ಅಭಿನಯ ಕೇಂದ್ರದ ಸಂಚಾಲಕರು ಕೀರ್ತನ್ ಶೆಟ್ಟಿ ಸುಳ್ಯ ಸ್ವಾಗತಿಸಿ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ, ಕಲ್ಲಡ್ಕ ಇಲ್ಲಿಯ ಸಹ ಶಿಕ್ಷಕರು ಜಯಪ್ರಸಾದ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ,ವಿದತ್ ಅಕಾಡೆಮಿಯ ಸಹ ಸಂಸ್ಥಾಪಕಿ ಕು. ಕಾವ್ಯಶ್ರೀ ವಂದನಾರ್ಪಣೆ ಗೈದರು.ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲಾ ಸಹಶಿಕ್ಷಕಿ ಆಶಾ ಮಯ್ಯ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಜಗದೀಶ್ ಅಮೀನ್ ನಡುಬೈಲು, ಸರಿತಾ ಜಗದೀಶ್, ರವಿಸ್ನೇಹಿತ್ ನಟ, ನಡುಬೈಲು ನಿರ್ಮಾಣದ, ನಿತಿನ್ ರೈ ಕುಕ್ಕುವಳ್ಳಿ-ನುಳಿಯಾಲು ಕಥೆ ಬರೆದು ನಿರ್ದೇಶಿಸಿದ ಬಹುತಾರಾಗಣ ಹೊಂದಿರುವ ತುಳು ಚಲನ ಚಿತ್ರ "ಧರ್ಮ ಚಾವಡಿ"ಹಾಗೂ ನಟ ರವಿಚಂದ್ರ ಮುಂಡೂರು ಕಥೆ ಬರೆದು ನಿರ್ದೇಶಿದ "ತೆನ್ಕಾಯಿ ಮಲೆ"ಕಿರುಚಿತ್ರ ಇವುಗಳ ಟೀಸರ್ ಪ್ರದರ್ಶನ ನಡೆಯಿತು. ಊರ- ಪರವೂರಿನ ಕಲಾಸಕ್ತರು, ಚಿತ್ರ ನಟರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.