ನಿವೃತ್ತ ಶಿಕ್ಷಕ, ಪತ್ರಕರ್ತ,ಅಂಕಣಕಾರ,ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿಗೆ ಅಂತರ್ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ.
ಪುತ್ತೂರು: ಆರ್.ಪಿ.ಕಲಾ ಸೇವಾ ಟ್ರಸ್ಟ್ (ರಿ)ಪಾಂಬಾರು, ಕೊಳ್ತಿಗೆ ಪುತ್ತೂರು ಇದರ ಆಶ್ರಯದಲ್ಲಿ ಜೂ:15ರಂದು, ಲಯನ್ಸ್ ಸೇವಾ ಮಂದಿರ ಪುತ್ತೂರು ಇಲ್ಲಿ ಜರುಗಿದ "ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಸೀಸನ್:4"ಗಾಯನ ಸ್ಪರ್ಧೆಯ ಗ್ರಾಂಡ್ ಫಿನಾಲೆ ಪ್ರಶಸ್ತಿ ಪ್ರದಾನ,ಸಾಧಕರಿಗೆ ಸನ್ಮಾನ, ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ, ಶಿಕ್ಷಣದಲ್ಲಿ ಹಿರಿಮೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ,ದಕ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ,ರಾಜ್ಯ ಪತ್ರಕರ್ತರ "ಮಂಗಳ ವರ್ಗೀಸ್ ರಾಜ್ಯ ಪ್ರಶಸ್ತಿ" ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ,ಲೇಖಕ, ಪತ್ರಕರ್ತ, ಪುತ್ತೂರು ಸುದ್ದಿ ಬಿಡುಗಡೆ ಪ್ರತಿಭಾರಂಗ ಅಂಕಣಕಾರ, ವ್ಯಂಗ್ಯ ಚಿತ್ರಗಾರ, ನಾರಾಯಣ ರೈ ಕುಕ್ಕುವಳ್ಳಿ ಅವರಿಗೆ "ಅಂತರ್ ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ" ಪ್ರದಾನ ಮಾಡಿ ಪುತ್ತೂರಿನ ಶಾಸಕ ಅಶೋಕ್ ಕುಮಾರ ರೈ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸುಂದರ ರೈ ಮಂದಾರ, ದಿನೇಶ್ ಶೆಟ್ಟಿಗಾರ್ ಕೋಡಪದವು,ಪ್ರಕಾಶ್ ಪಾವಂಜೆ, ಮಿಥುನ್ ರಾಜ್ ವಿದ್ಯಾಪುರ, ಬಾಬಣ್ಣ ಸಂಟ್ಯಾರು,ಸುಬ್ರಾಯ ಕಲ್ಪಣೆ,ಪ್ರಿಯಾ ಸುಳ್ಯ, ಬಾಲಕೃಷ್ಣ ನೆಟ್ಟಾರು, ಶ್ರೀಮತಿ. ಶ್ರೀ ಕುಮಾರ್ ಪೆರ್ನಾಜೆ ಸೇರಿದಂತೆ ಅನೇಕ ಸಾಧಕರನ್ನು ಅವರ ಅನ್ಯಾನ್ಯ ಸಾಧನೆಗಳನ್ನು ಗುರುತಿಸಿ ,ಅಂತರ್ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆರ್.ಪಿ.ಕಲಾ ಸೇವಾ ಟ್ರಸ್ಟ್ (ರಿ)ನ ಸಂಚಾಲಕ ರವಿ ಪಾಂಬಾರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ , ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟು ಪುತ್ತೂರು ಇದರ ಸಂಚಾಲಕರು ಹೇಮನಾಥ ಶೆಟ್ಟಿ ಕಾವು, ಪುತ್ತೂರು ನಗರ ಪ್ರಾಧೀಕಾರ (ಪುಡಾ) ಅಧ್ಯಕ್ಷರು ರಾಮಚಂದ್ರ ಅಮಳ,ಪುತ್ತೂರು ತಾ.ಕ.ಸಾ.ಪ ಅಧ್ಯಕ್ಷರು ಪುತ್ತೂರು ಉಮೇಶ್ ನಾಯಕ್, ಸುಳ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರು, ಸದಾನಂದ ಪಾವಂಜೆ,ಗಾಯಕರು ವಿಜಯ ಕುಮಾರ್ ಸುಳ್ಯ,ಯುವ ಗಾಯಕ ಸಂಗೀತ ನಿರ್ದೇಶಕರು, ಪದ್ಮರಾಜ್ ಬಿ.ಸಿ.ಚಾರ್ವಾಕ,ಮಾಜಿ ತಾ.ಪಂ.ಸದಸ್ಯರು ಪುತ್ತೂರು ರಾಮ ಪಾಂಬಾರು, ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾಟ್ರಸ್ಟ್ ನ ಅಧ್ಯಕ್ಷರು ಶ್ರೀಧರ್ ಎಕ್ಕಡ್ಕ ಎಲ್ಲರನ್ನೂ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಮಂಡೆಕೋಲು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಅಡ್ಯನಡ್ಕ ಪ್ರಾರ್ಥಿಸಿದರು.ಉಪಾಧ್ಯಕ್ಷರು ರೋಹಿತ್ ಕುರಿಕ್ಕಾರ್, ಮಮತಾ ಮಡಿಕೇರಿ ಸಮಗ್ರ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು.ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.