“ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಎ.ಡಿ.ಕೊಟ್ನಾಳ ಆಯ್ಕೆ”

ಬೆಂಗಳೂರು:  ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಪ್ರಕಾಶನ, ಗದಗ ಇವರು ಬಹುಮುಖ ಸೇವೆಯನ್ನು ಗುರುತಿಸಿ “ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿಗೆ" ಡಾ. ಎ.ಡಿ. ಕೊಟ್ನಾಳ ರವರನ್ನು ಆಯ್ಕೆ ಮಾಡಿದ್ದಾರೆ, ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡವರು ಜೊತೆಗೆ ಸಮಾಜ ಸೇವೆ ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತನ್ನ ಸೇವಾ ಕಾರ್ಯವನ್ನು ಮಾಡಿದವರು ಸಾಹಿತ್ಯಾಸಕ್ತರಾಗಿರುವ ಇವರು ಕೃಷಿ ಕ್ಷೇತ್ರದಲ್ಲೂ ಕಳೆದ 35 ವರ್ಷಗಳಿಂದ ರೈತ ಸಮುದಾಯದ ಅಬಿವೃಧಿಗೆ ಶ್ರಮಿಸುತ್ತಿದ್ದಾರೆ.

ಡಾ.ಕೊಟ್ನಾಳ ಇವರ ಬಹುಮುಖ ಸೇವೆಗೆ ವಿವಿಧ ಸಂಘ ಸಂಸ್ಥೆಗಳು ನೀಡುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಪ್ರಕಾಶನ, ಗದಗ ಕೊಡಮಾಡುವ "ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿ" ಯು ಇವರ ಅಪ್ರತಿಮ ಸಾಧನೆಗೆ ಸಂದ ಗೌರವವಾಗಿದೆ. 


20 ಜುಲೈ 2025 ರ ರವಿವಾರ ದಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಆಯೋಜಿಸಿರುವ ಅಕ್ಷರೋತ್ಸವ ಅದ್ದೂರಿ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡುತಾರೆಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. 


ಪ್ರಶಸ್ತಿಗೆ ಅಯ್ಕೆಯಾಗಿರುವ ಡಾ. ಎ.ಡಿ. ಕೊಟ್ನಾಳ ಅವರಿಗೆ ನಾಡಿನ ಅನೇಕ ಸಂಘ ಸಂಸ್ಥೆಗಳು ಮತ್ತು ಬಂಧು ಬಳಗದವರು, ಸ್ನೇಹಿತರು, ಗಣ್ಯಮಾನ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
Next Post Previous Post
ಜಾಹೀರಾತು

Advertisement

Advertisement

```

Advertisement

Advertisement