ಪುತ್ತೂರು ತಾಲೂಕು ಸೀರತ್ ಕಮಿಟಿ ಸ್ಮರಣ ಸಂಚಿಕೆ ಬಿಡುಗಡೆಗೆ ತೀರ್ಮಾನ ಸ್ಮರಣ ಸಂಚಿಕೆ ಸಂಚಾಲಕರಾಗಿ ಶಕೂರ್ ಹಾಜಿ ಕಲ್ಲೆಗ ಸಂಪಾದಕರಾಗಿ ಡಾ.ಹಾಜಿ. ಎಸ್ ಅಬೂಬಕರ್ ಆರ್ಲಪದವು
ಪುತ್ತೂರು: ಪುತ್ತೂರು ತಾಲೂಕು ಸೀರತ್ ಕಮಿಟಿಯು 1990ರಲ್ಲಿ ಪ್ರಾರಂಭಗೊಂಡು ತಾಲೂಕಿನಾದ್ಯಂತ ಜಾಗೃತಿಯನ್ನು ಮೂಡಿಸಿ ಇತಿಹಾಸವನ್ನು ಕಂಡ ಸಂಸ್ಥೆಯಾಗಿದೆ ಈ ಸಂಸ್ಥೆಯನ್ನ ಪ್ರಚುರಪಡಿಸುವ ಉದ್ದೇಶದಿಂದ ಹಾಗೂ ತಾಲೂಕು ವ್ಯಾಪ್ತಿಯ ಮಸೀದಿ ಮದರಸಗಳ ವಿಳಾಸಗಳು ಸೇರಿದಂತೆ ವಿವಿಧ ವಿಷಯಗಳನ್ನು ಹಾಗೂ ಉಪಯುಕ್ತ ಮಾಹಿತಿಗಳನ್ನು ಪರಿಚಯಿಸುವುದರೊಂದಿಗೆ ಸ್ಮರಣ ಸಂಚಿಕೆಯನ್ನು ಮಾಡಲು ಪುತ್ತೂರು ತಾಲೂಕು ಸೀರತ್ ಕಮಿಟಿಯು ತೀರ್ಮಾನಿಸಿದೆ
ಸಮಿತಿ ಸಭೆಯು ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದು ಸ್ಮರಣ ಸಂಚಿಕೆ ಬಿಡುಗಡೆ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು
ಗೌರವ ಸಲಹೆಗಾರರಾಗಿ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಮತ್ತು ಎಲ್ ಟಿ ಅಬ್ದುಲ್ ರಜಾಕ್ ಹಾಜಿ ಪುತ್ತೂರು
ಸಂಚಾಲಕರಾಗಿ ಶಕೂರ್ ಹಾಜಿ ಕಲ್ಲೆಗ , ಸಂಪಾದಕರಾಗಿ ಡಾ.ಹಾಜಿ. ಎಸ್. ಅಬೂಬಕರ್ ಆರ್ಲಪದವು ಸದಸ್ಯರುಗಳಾಗಿ ಹಾಜಿ ಮುಹಮ್ಮದ್ ಸಾಬ್ ಕೂರ್ನಡ್ಕ, ಅಬ್ದುಲ್ ರಹಮಾನ್ ಹಾಜಿ ಆಜಾದ್, ಇಬ್ರಾಹಿಂ ಗೋಳಿಕಟ್ಟೆ, ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಾಲ್ಮರ ಶರೀಫ್ , ಅಬ್ದುಲ್ಲ ಹಾಜಿ ಪಿ ಬಿ, ವಿ ಕೆ ಶರೀಫ್ ಬಪ್ಪಳಿಗೆ ಇವರನ್ನು ಆಯ್ಕೆ ಮಾಡಲಾಯಿತು