ಯುಎಇ ಕೆಸಿಎಫ್ ಸಾರಥಿ ಗಳಿಗೆ ಪಾಣಾಜೆ ಸುನ್ನಿ ಕೋ ಆರ್ಡಿನೇಷನ್ ಸಮಿತಿಯಿಂದ ಸನ್ಮಾನ
ಪುತ್ತೂರು: ವಿದೇಶದಲ್ಲಿದ್ದು ತಾಯ್ನಾಡಿಗೆ ಆಗಮಿಸಿದ ಅಬುದಾಬಿ ಕೆಸಿಎಫ್ ಸಾರಥಿ ವಹಾಬ್ ಕಂಚಿಲ್ಕುಂಜ ಹಾಗೂ ದುಬೈ ಕೆ ಸಿ ಎಫ್ ಸಾರಥಿ ಖಲಂದರ್ ಉಡ್ಡಂಗಲ ಇವರಿಗೆ ಸುನ್ನಿ ಕೋ ಆರ್ಡಿನೇಷನ್ ಕಮಿಟಿ ಆರ್ಲಪಲವು ಪಾಣಾಜೆ ವತಿಯಿಂದ ಸನ್ಮಾನ ಕಾರ್ಯಕ್ರಮವು ಜರಗಿತು.
ಈ ಸಂದರ್ಭದಲ್ಲಿ ಸುನ್ನಿ ಕೋ ಆರ್ಡಿನೇಷನ್ ಪಾಣಾಜೆ ಇದರ ಚೇರ್ಮನ್ ಡಾ.ಹಾಜಿ.ಎಸ್ ಅಬೂಬಕರ್ ಆರ್ಲಪದವು ಪ್ರಧಾನ ಕನ್ವೀನರ್ ಶಿಯಾಬುದ್ದೀನ್ ಜೆ. ಎಸ್ , ಕೋಶಾಧಿಕಾರಿ ಎ ಎಸ್ ಅಬೂಬಕರ್ ಕೆಎಂಜೆ ಅಧ್ಯಕ್ಷರಾದ ಲತೀಫ್ ಮುಸ್ಲಿಯಾರ್ ಕೂರತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಷರೀಫ್ ಕಡಮಾಜೆ
ಅಫ್ರಾ ಮಸೀದಿ ಅಧ್ಯಕ್ಷರಾದ ಶಾಫಿ ಕಾನ, ಎಸ್ ಎಸ್ ಎಪ್ ಪಾಣಾಜೆ ಯೂನಿಟ್ ಅಧ್ಯಕ್ಷರಾದ ಸಿಂಸಾರುಲ್ ಹಖ್, ಸುನ್ನಿ ನೇತಾರರಾದ ಎ ಎಸ್ ಆರ್ ಮುಹಮ್ಮದ್ ಕುಂಞ, ಮೂಸ ಆರ್ಲಪದವು , ಖಾಲಿದ್ ಪಾರ್ಪಲ, ಸಲೀಂ ತೋಡುಬಳಿ ಮತ್ತಿತರರು ಉಪಸ್ಥಿತರಿದ್ದರು